Posts

bhoomi

ಭೂಮಿ ಅದರಿಂದಾಗಿಯೇ ಇಷ್ಟೆಲ್ಲಾ ಆಗಿದೆಯೇ ಎಂಬುದೇ ನನ್ನ ಚಿಂತೆಗೆ ಕಾರಣವಾಗಿತ್ತು. ಆದರೆ ಒಂದು ಸಣ್ಣ ಕಬ್ಬಿಣದ ತುಂಡಿನಿಂದ ಹೊಡೆದ ಪೆಟ್ಟು ಇಷ್ಟು ಜೋರಾದ ಶಬ್ಧ ಹೊರಡಿಸುವುದು ಸಾಧ್ಯವಿಲ್ಲ ಎಂದುಕೊಂಡ ನಾನು, ಹೊರಗೆ ಹೋಗಿ ನೋಡುವುದು ಅವಶ್ಯಕ ಎಂದುಕೊಂಡೆ. ಆಗಿದ್ದಿಷ್ಟು, ನಮ್ಮ ಮನೆಯ ಹತ್ತಿರದಲ್ಲೇ ಇರುವ ನರಸಿಂಹ ಪರ್ವತದಲ್ಲಿ ಒಂದು ಗುಹೆ ಇದ್ದಿದ್ದು ನಮಗೆ ಬಾಲ್ಯದಿಂದಲೂ ಕುತೂಹಲ ಕೆರಳಿಸಿದ್ದ ವಿಷಯವಾಗಿತ್ತು, ಆದರೆ ಅದರೊಳಗೆ ಇಣುಕಿ ನೋಡುವುದು ಅಥವಾ ಅದರಿಂದ ಎಲ್ಲೆಲ್ಲಿಗೆ ದಾರಿಗಳು ತೆರೆದುಕೊಳ್ಳುತ್ತದೆ ಎಂಬುದರ ಬಗೆಗಿನ ವಿವರಗಳು ಯಾರಿಗೂ ತಿಳಿದಿರಲಿಲ್ಲ. ಅವರಿವರು ಹೇಳಿದ ಅಂತೆ ಕಂತೆಗಳೆಲ್ಲಾ ಸೇರಿ ನಮ್ಮ ಕುತೂಹಲವೂ ಬೆಳೆಯುತ್ತಾ ಹೋದರೂ ಕೂಡ, ನಮ್ಮಲ್ಲಿ ಯಾರಿಗೂ ಅದರ ಒಳಕ್ಕೆ ಹೋಗುವ ಧೈರ್ಯ ಬಂದಿರಲಿಲ್ಲ. ನಾವು ಬೆಳೆದರೂ ಗುಹೆಯ ಒಳಗಿಳಿಯಲು ಬೇಕಾದ ಧೈರ್ಯ ನಮ್ಮಲ್ಲಿ ಬೆಳೆಯಲೇ ಇಲ್ಲ. ಗೆಳೆಯರ ಗುಂಪಿನಲ್ಲಿದ್ದ ಎಲ್ಲರಿಗೂ ಸಹ ಚಾರಣ, ಸುತ್ತಾಟ ಸಾಹಸದ ಕೆಲಸಗಳೂ ಅಂದರೆ ಬಹಳ ಇಷ್ಟ, ಆದರೆ ಪರ್ವತದ ಬಳಿ ಇದ್ದ ಗುಹೆಯ ಬಗ್ಗೆ ಮಾತನಾಡಿದ ತಕ್ಷಣ ಎಲ್ಲರೂ ಬೇರೆ ಬೇರೆ ವಿಷಯಗಳ ಬಗ್ಗೆ ಗಮನ ಹರಿಸಲು ಪ್ರಾರಂಭಿಸುತ್ತಿದ್ದರು ಅಥವಾ ವಿಷಯಾಂತರ ಮಾಡುತ್ತಿದ್ದರು. ಇದಕ್ಕೆಲ್ಲಾ ಕಾರಣ ಗುಹೆಯ ಬಗೆಗಿದ್ದ ಕತೆಗಳು.     ವಾರದ ಕೊನೆಯೊಂದರಲ್ಲಿ ನಾನು ಪರ್ವತದ ಗುಹೆಯ ಅನ್ವೇಷಣೆಗೆ ಹೊರಟು ನಿಂತೆ. ಯಾರು ಬರಲಿ ಬಿಡಲಿ ನಾ...

mobile

¤¸ÀÛAvÀÄ ªÁt ¥sÉÆÃ£À£ÀÄß Q«¬ÄAzÀ PɼÀUÉ Er E£ÉßµÀÄÖ ªÀiÁvÀÄ ¸ÁPÀÄ ©r Q«AiÀÄ zÉÆÃjUÉ CAnPÉÆArvÉAzÀgÉ FZÉUÉ ¨ÁgÀzÀ ¸ÀªÀÄÆºÀ ¸À¤ß ªÉƨÉÊ¯ï ªÀiÁvÀÄ ªÀÄ£ÉPÉr¹vÀÄ ¹UÀß®Äè AiÀÄĪÀd£ÁAUÀ PÉr¹vÀÄ. CPÀÌ ¥ÀPÀÌzÀªÀgɯÁè AiÀiÁgÀÆ ¨ÉÃqÀ., ¥sÉÆÃ£À¯Éè J®ègÉÆqÉ ªÀiÁvÀÄ FUÉ®è. ªÁºÀ£ÀªÀÅ wgÀÄUÀĪÀÅzÀÄ gÀ¸ÉÛ §¢ mÉʦ¸ÀÄvÀ ¹®ÄQzÀ£ÀÄ §¹ì£Àr. ªÀÄzÀĪÉAiÀİ, ªÀÄÄAfAiÀİ, ªÀĸÀtzÀ°, PÁè¹£À°, ¥ÁQð£À°, gÀ¸ÉÛAiÀİ, §¸À¢AiÀİ ¥sÉÆÃ¤®èzÁ fêÀ PÁuÉ£À¯Áè., PÉ®¸À«®èzÁ ¨ÉgÀ¼ÀÄ ¹UÀĪÀÅ¢¯Áè., JzÀÄgÀÄ ¹PÀÌ UɼÉAiÀĤVAvÁ PÁtzÀ ªÀÄ£ÀĵÀå£À ªÉÆÃºÀPÀ £ÀÄr., PÉÆÃQ®ªÁtÂ, PÀAa£À PÀAoÀ, CwAiÀiÁUÀ°®èªÀAvÁ., £ÀÄAUÀ¢gÀ° ¸ÀÄAzÀgÀ ¨Á¼À£ÀÄ vÁAwæPÀ £ÉÊ¥ÀÄtåvÉAiÀÄ ±ÉÆÃzsÀ.,                           ¢Ã¥ÀPï qÉÆÃAUÉæ. ²ªÀªÉÆUÀÎ.,

ಅನುಮಾನಾಸ್ಪದ ವ್ಯಕ್ತಿ

ಅನುಮಾನಾಸ್ಪದ ವ್ಯಕ್ತಿ  ಎನ್ನುವ ಶೀರ್ಷಿಕೆ ಎಷ್ಟು ಸರಿ ಎನ್ನುವುದು ನನ್ಗೆ ಅಷ್ಟು ಸರಿಯಾಗಿ ಗೊತ್ತಿಲ್ಲ. ಆದರೂ ಅದೇ ಹೆಸರು ಸೂಕ್ತ ಅನ್ನಿಸುತ್ತಿದೆ. ನಾನು ಬೆಂಗಳೂರಿಗೆ ಹೋಗಬೇಕಾಗಿ ಬಂದಾಗ ಗೆಳೆಯ ಸಂತೋಷನ ಜೊತೆಗೆ ರೈಲಿನಲ್ಲಿ ಹೋಗೋದು ಅಂತಾ ತೀರ್ಮಾನ ಮಾಡಿದೆವು. ರೈಲು ಟಿಕೆಟ್ ತೆಗೆದುಕೊಂಡು ರೈಲು ಹತ್ತಿದಾಗ ನಮ್ಮ ಬಳಿ ಕುಳಿತ ವ್ಯಕ್ತಿಯೊಬ್ಬನ ಪರಿಚಯವಾಯಿತು. ವ್ಯಕ್ತಿಯ ವಿಶೇಷ ಶಕ್ತಿಗಳು, ಅವನ ಅನಿಸಿಕೆಗಳು ಹಾಗು ಅವನ ಬುದ್ದಿವನ್ತಿಕೆಗಳು ಇವುಗಳ ವಿಶ್ಲೇಷಣೆಯ ಸಾರವೇ ಈ ಕತೆ. ಮೊದಲಿಗೆ ಆತ ಸುತ್ತಮುತ್ತಲು ಇರುವ ಮನುಷ್ಯರ ಪರಿಚಯ ಮಾಡಿಕೊಂಡ, ನಂತರ ಅವರವರ ಉದ್ಯೋಗಗಳ ಬಗ್ಗೆ ತಿಳಿದುಕೊಂಡು, ಅವರಿಗೆ ಅವರವರ ಕೆಲಸಗಳನ್ನು ದಯವಿಟ್ಟು ಸರಿಯಾಗಿ ನಿಭಾಯಿಸುವಂತೆ ಮನವಿ ಮಾಡಿಕೊಳ್ಳುವಂತೆ ಆದೇಶ ನೀಡಿದ. ಆಗ ನನ್ನ ಕುತೂಹಲ ಕೆರಳಿ "ತಾವೇನು ಕೆಲಸ ಮಾಡುತ್ತೀರಿ" ಅಂದೆ ಅದಕ್ಕೆ ಆತ ತಾನೊಬ್ಬ ರೈತನೆಂದೂ ಹಲವಾರು ಕಾರಣಗಳಿಂದ ಯಾವುದೇ ಬೆಳೆ ಬೆಳೆಯುತ್ತಿಲ್ಲವೆಂದೂ ಹೇಳಿದ. ನಮಗೆಲ್ಲ ನ್ಯಾಯವಾಗಿ ಕೆಲಸ ಮಾಡೋಕೆ ಹೇಳೋ ನೀವು, ನಾವು ತಿನ್ನೋ ಅನ್ನಾನೆ ಬೆಳೀತಿಲ್ಲವಲ್ಲ ಅಂದೆ, ಅದಕ್ಕಾತ ತೆಲಿಸೋ ಉತ್ತರ ಕೊಟ್ಟ. ಎಲ್ಲರೂ ಹೀಗೆ "ಬೇರೆಯವರು ಎಲ್ಲರೂ ಸರಿಯಾಗಿರಬೇಕು ಅಂತಾ ಬಯಸ್ತಾರೆ ಆದರೆ ತಾವು ಎಷ್ಟು ಸರಿ ಇದೀವಿ ಅಂತಾ ಯೋಚನೆ ಮಾಡೋಕೆ ಪಾಪ ಸಮಯಾನೆ ಸಿಕ್ಕೊಲ್ಲ" ಅನ್ನಿಸಿತು. ಆತನಿಗೆ ಬಹಳ ಯೋಚನೆ ಉಂಟು ಮಾಡಿದ ವಿಷಯವೆ...
ಪ್ರಾಣಿ ಹಿಂಸೆ ಮತ್ತು ಪ್ರಾಣಿಗಳು.

ಬೈಕ್ ಬಾಲು ಮತ್ತು ಬಲಿ.

                             ಬೈಕ್  ಬಾಲು ಮತ್ತು ಬಲಿ, ಕತೆಯ ಹೆಸರು ಓದಿದೊಡನೆ ಓದುಗರು ಇದು ಯಾವುದೋ ಬೈಕ್ ಓಡಿಸುವವನ ದುರಂತ  ಕತೆ ಎಂದು ತಿಳಿದರೆ, ಅದು ಒಂತರ  ಸರಿ. ನಮ್ಮೂರ ಬಾಲುಗೆ ಬೈಕ್ ಗಳೆಂದರೆ ಪ್ರಾಣ. ಯಾವಾಗಲೂ ವಿವಿದ ಬೈಕ್ ಗಳ ಬಗ್ಗೆಯೇ ಯೋಚಿಸುವುದು ಅವನ ಜಾಯಮಾನ. ಅವನ ರೂಮಿನ ತುಂಬೆಲ್ಲ ವಿವಿದ ಬಗೆಯ ಬೈಕ್ ಗಳ ಚಿತ್ರಗಳು. ಕಾಲೇಜು ಮುಗಿಸುತ್ತಿದ್ದಂತೆ ಬೇರೆ ಬೇರೆ ಬೈಕ್ ಗಳ ಬಗ್ಗೆ ಇಂಟರ್ನೆಟ್ನಲ್ಲಿ ಹುಡುಕಾಟ, ಚಿತ್ರಗಳ ಸಂಗ್ರಹ, ಯಾವ ಯಾವ ಬೈಕ್ ಎಷ್ಟು ಮೈಲೇಜು ಕೊಡುತ್ತೆ, ಎಷ್ಟು ಸಿ ಸಿ ಎಂಜಿನ್. ಪಿಕ್ ಅಪ್ ಹೇಗಿದೆ, ಇವೆಲ್ಲ ಅವನ ಅಧ್ಯಯನದ ವಿಷಯಗಳು. ಇಂತಹ ಬೈಕ್ ಹುಚ್ಹನ ಹತ್ತಿರ ಹಳೆಯ ಬೈಕ್ ಒಂದಿತ್ತು. ಆತ ಅದನ್ನು ಓಡಿಸಿಕೊಂಡು ಹೋಗುತ್ತಿರುವಾಗ ಹಾರ್ನ್ ಹೊಡೆಯೋದೆ ಬೇಕಿರಲಿಲ್ಲ, ಅದರ ಎಂಜಿನ್ ಆರ್ಭಟಕ್ಕೆ ಜನ ರಸ್ತೆಯಿಂದ ದೂರ ಸರಿಯುತ್ತಿದ್ದರು , ನಟ್ಟುಗಳು ಸಡಿಲವಾಗಿ ಬೈಕ್ ಹಾಡಿಗೆ ಕೋರಸ್ ಹಾಡುತ್ತಿತ್ತು. ಅದರಲ್ಲಿ ಕೂರಲು ಮಿತ್ರರು ಯಾರೂ ಮುಂದೆ ಬರುತ್ತಿರಲಿಲ್ಲ, ಏಕೆಂದರೆ ಅದು ನಿಲ್ಲಬೇಕಾದಲ್ಲಿ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿರಲಿಲ್ಲ. ಅದನ್ನು ದೂಕಿ ಸ್ಟಾರ್ಟ್ ಮಾಡಬೇಕಿತ್ತು, ಯಾಕೆಂದರೆ ಅದರ ಕಿಕ್ಕ...

ನಸೀಮ ಬೀಡಿ ನಜೀರ್ ಸಾಬ್

                   ನಮ್ಮೂರ ನಸೀಮ ಬೀಡಿ ನಜೀರ್ ಸಾಬ್ ರ ಕತೆ ಇಂತಿದೆ. ನಜೀರ್ ಸಾಬರು ಒಳ್ಳೆಯ ವ್ಯಕ್ತಿ ಎಲ್ಲರಿಗೂ ಬೇಕಾದಂತಹ ಮನುಷ್ಯ. ಆತನಿಂದ ಕೆಲಸ ಮಾಡಿಸಿಕೊಳ್ಳದ ವ್ಯಕ್ತಿ ನಿಮಗೆ ಬಹುಷಃ ಊರಲ್ಲಿ ಯಾರೂ ಸಿಕ್ಕುವುದು ಕಷ್ಟ. ನಜೀರ್ ಸಾಬರಿಗೆ ಗೊತ್ತಿಲ್ಲದ ಕೆಲಸ ಏನು ಎಂದರೆ ಅದಕ್ಕೂ ಉತ್ತರ ಸಿಕ್ಕುವುದು ಕಷ್ಟ.                     ನಜೀರ್ ಸಾಬರದ್ದು ಸಮಯಾವಲಂಬಿ ಉದ್ಯೋಗ. ಮಳೆಗಾಲದಲ್ಲಿ ಹಪ್ಪಳ ಸಂಡಿಗೆ ಮಾರುವುದು, ರಾತ್ರಿ ಹೊತ್ತು ಗದ್ದೆಗೆ ಹೋಗಿ ಮೀನು ಕಡಿದು ತಂದು ಮಾರುವುದು, ಗದ್ದೆ ಅಂಚು ಕಡಿಯುವುದು, ಚಳಿಗಾಲದಲ್ಲಿ ಹಾಸಿಗೆ ರಿಪೇರಿ, ಗುಜರಿ ಸಂಗ್ರಹಿಸುವುದು, ತೋಟದ ಕೆಲಸದಲ್ಲಿ ಸಹಾಯ ಮಾಡೋದು, ಅಡಿಕೆ ಸುಲಿಯೋದು. ಬೇಸಿಗೆಯಲ್ಲಿ ಕಟ್ಟಿಗೆ ಕಡಿಯೋದು, ದರಗು ಗುಡಿಸೋದು, ಗೊಬ್ಬರ ಮಾಡೋದು, ಹಲಸಿನ ಹಣ್ಣಿನ ವ್ಯಾಪಾರ, ಮಾವಿನ ಹಣ್ಣನ್ನು ಎಲ್ಲರ ಮನೆಗೆ ಉಚಿತವಾಗಿ ಕೊಡೋದು, ಹೀಗೆ ಇವುಗಳು ಅವನು ಮಾಡುವ ಕೆಲವು ಕೆಲಸಗಳ ವಿವರ. ವಿವರ ನೀಡದೆ ಇದ್ದರೂ ಆತನ ಇನ್ನೊಂದು ಕೆಲಸ ಈಗಾಗಲೇ ನಿಮಗೆ ತಿಳಿದಿರಬಹುದು. ಅದೇನೆಂದರೆ ಬೀಡಿ ಎಳೆಯೋದು. ಆತನ ಬಾಯಲ್ಲಿ ಯಾವಾಗಲು ಬೀಡಿಯೊಂದು ಹೊಗೆಯಾಡುತ್ತಲೇ ಇರಬೇ...

ತಪೋ ಫಲ

ತಪೋ ಫಲ ಎಂದಾಕ್ಷಣ ಇದು ಯಾವುದೋ ಪುರಾಣ ಕಾಲದ ಕತೆ ಅಂದುಕೊಳ್ಳಬೇಡಿ. ಇದು ಈ ಶತಮಾನದ ಕಥೆ.                        ನನ್ಗೆ ಯಾವಾಗಲೂ ಒಬ್ಬರು ಆಧ್ಯಾತ್ಮದ ದಾಸರಾದ ಮನುಷ್ಯರೊಬ್ಬರು ಹೇಳುತಿದ್ದರು, ದೇವರನ್ನು ನಿರ್ಮಲ ಮನಸ್ಸಿಂದ ಬೇಡಿಕೊಂಡರೆ ನಮ್ಮ ಇಷ್ಟಾರ್ಥಗಳು ಖಂಡಿತವಾಗಿ ಈಡೇರುತ್ತದೆ ಎಂದು. ಇದನ್ನು ಕೇಳಿ ನಾಸ್ಥಿಕನಾಗಿ ನಮ್ಮ ಮನೆಯಲ್ಲಿ ಎಲ್ಲ ಪದ್ದತಿಗಳನ್ನೂ ಹೀಯಾಳಿಸುತ್ತ, "ಬೆಕ್ಕಿನ ಮೇಲೆ ಬುಟ್ಟಿ ಮುಚ್ಚಿಡುವ" ಕತೆ ಹೇಳಿ ತಮಾಷೆ ಮಾಡುತ್ತಾ ಇದ್ದ ನಾನು  ಯಾವಾಗ ಅಪ್ಪಟ ಭಕ್ತಿ ಪಂಥಕ್ಕೆ ಸೇರಿದ ಮನುಷ್ಯನಾದೆ ಎಂಬುದೇ ತಿಳಿಯಲಿಲ್ಲ. ಕೆಲವೇ ವರ್ಷಗಳಲ್ಲಿ ನಾನು ದೇವರ ಪಕ್ಕಾ ಭಕ್ತನಾಗಿ ದೇವರ ನಾಮ ಸ್ಮರಣೆ ಇಲ್ಲದೆ ಯಾವ ಕೆಲಸಕ್ಕೂ ಹೆಜ್ಜೆ ಇಡದ ಮಟ್ಟಕ್ಕೆ ಬಂದು ಬಿಟ್ಟೆ. ದಿನಾಲು ಬೆಳಿಗ್ಗೆ ಎದ್ದು ದೇವರ ಸ್ತೋತ್ರ ಕೇಳುವುದು, ಹೇಳುವುದು, ಟಿವಿಯಲ್ಲಿ ಹಲವಾರು ದೇವರ ದರ್ಶನ ಮಾಡುವುದು,ಮಂಗಳಾರತಿಯಲ್ಲಿ ಪಾಲ್ಗೊಂಡಂತೆ ಕಲ್ಪಿಸಿಕೊಳ್ಳೋದು. ದಿನಭವಿಷ್ಯ ಚಾಚೂ ತಪ್ಪದೆ ನೋಡೋದು, ಜ್ಯೋತಿಷ್ಯ ಕಾರ್ಯಕ್ರಮದಲ್ಲಿ ಬರುವ ಎಲ್ಲ ಪರಿಹಾರಗಳನ್ನು ವಿಶೇಷ ಆಸಕ್ತಿಯಿಂದ ಪಾಲಿಸುವುದು ಹೀಗೆ ನನ್ನ ದಿನ ನಿತ್ಯದ ಚಟುವಟಿಕೆಗಳಲ್ಲಿ ಮಹತ್ತರ  ಬದಲಾವಣೆ ಕಂಡುಕೊಂಡೆ. ಹೀಗಿರುವಾಗ ದೇವಸ್ಥಾನದಲ್ಲಿ ...