Posts

Showing posts from 2021

ಕುರುಡು ಮಂತ್ರ -ಪದ್ಮನಾಭ ಆಗುಂಬೆ ಅವರ ಕಾದಂಬರಿ ಬಗ್ಗೆ ನನ್ನ ಲೇಖನ.

Image
ಕುರುಡು ಮಂತ್ರ -ಪದ್ಮನಾಭ ಆಗುಂಬೆ ಅವರ ಕಾದಂಬರಿ ಬಗ್ಗೆ ನನ್ನ ಲೇಖನ. ಇಂಡಿಯಾ ದೇಶದ ಅಪಾಯಗಳಲ್ಲಿ ಪ್ರಮುಖವಾದದ್ದು ಭವಿಷ್ಯದೆಡೆಗೆ ನಿಖರ ಗುರಿ ಹೊಂದಿರದೆ ಹಾಗೆಯೇ ಮುಂದೆ ಸಾಗುತ್ತಿರುವ ಯುವಜನತೆ. ಯುವಜನತೆ ಸರಿಯಾದ ದಾರಿ ದಿಕ್ಕು ತೋರಿದರೆ ಮಾತ್ರ ದೇಶಕ್ಕೆ ಆಸ್ತಿ ಹಾಗೂ ಅಭಿವೃದ್ಧಿಗೆ ದಾರಿ. ಅದೇ ಇವರುಗಳು ಗೊತ್ತುಗುರಿಯಿಲ್ಲದೇ ಸಾಗುತ್ತಿದ್ದರೆ, ಇವರುಗಳು ಒಂತರ ಟೈಂಬಾಂಬ್ ಎಂದೇ ಹೇಳಬಹುದು, ಏಕೆಂದರೆ ಹೀಗಾದಲ್ಲಿ ಈ ಯುವಜನತೆ ಮಾನವ ಸಂಪನ್ಮೂಲ ವಾಗುವ ಬದಲು ಜನಸಂಖ್ಯಾ ಸ್ಫೋಟದಂತಹ ಸಮಸ್ಯೆಯಾಗಲೂಬಹುದು,ನಂತರದಲ್ಲಿ ನಿರುದ್ಯೋಗ, ಸಾಮಾಜಿಕ ಪಿಡುಗುಗಳು, ಸಂಸ್ಕಾರದ ಕೊರತೆ, ಮುಂತಾದ ರೋಗಗಳಿಗೆ ಕಾರಣವಾಗಬಹುದು. ಇದರಲ್ಲಿ ಯಾವುದೇ ಅನುಮಾನವಿಲ್ಲ.   ದಾರಿತಪ್ಪಿದ ಇಂತಹ ಯುವಜನತೆಯ ಪೈಕಿ ಒಬ್ಬ ಯುವಕನ ಕಥೆಯೇ "ಕುರುಡು ಮಂತ್ರ" ಎಂದು ಹೇಳಬಹುದು. ಈ ಕಾದಂಬರಿಯ ಮುಖ್ಯ ಪಾತ್ರಧಾರಿ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಅಥವಾ ತನ್ನ guilt ಅನ್ನು ಮರೆಮಾಚಲು ಆಧ್ಯಾತ್ಮ, ಧರ್ಮ,  ಪ್ರವಚನಗಳಲ್ಲಿ ತೊಡಗಿಕೊಂಡರೆ ಏನಾಗಬಹುದು ಎಂಬುದಕ್ಕೆ ಟೀಕಪ್ಪನಿಗಿಂತ ಬೇರೆ ಉದಾಹರಣೆ ಬೇಕೆ?  ಇಲ್ಲಿ ಟೀಕಪ್ಪ ಯುವ ಜನತೆಯ ರೆಪ್ರೆಸೆಂಟೇಟಿವ್ ನಂತೆ ಕಂಡುಬರುತ್ತಾನೆ, ಅದಲ್ಲದೆ ಯುವ ಸಂಸ್ಕೃತಿಯ ಪ್ರತಿಬಿಂಬವು ಸಹಿತ ಆಗಿದ್ದಾನೆ. ಕಾದಂಬರಿಯು ಹದಿಹರೆಯದ ತಲ್ಲಣಗಳು, ಬಂಡಾಯ ಮನೋಭಾವ, ಕಾಮದೆಡಗಿನ ಕುತೂಹಲ,ಕೌತುಕ ಹಾಗು ಅದರ ಬಗೆಗಿನ ಮಡಿವಂತಿಕೆ, ನಿರ್

ಗತಕಾಲದ ಕತೆ ಹೇಳಿದ ವಿನಾಯಕ ರೇಡಿಯೋ ಸರ್ವಿಸ್

Image
     ಗತ ಕಾಲದ ಕತೆ ಹೇಳಿದ ವಿನಾಯಕ ರೇಡಿಯೋ ಸರ್ವಿಸ್      ಸಂಸ್ಕೃತಿ ಅಧ್ಯಾಯನ ಅಂದ ತಕ್ಷಣ ನಮಗೆಲ್ಲ ನಮ್ಮ ದೇಶದ ವೈವಿಧ್ಯಮಯ ಸಂಪ್ರದಾಯಗಳು, ಆಚರಣೆಗಳು ಕಣ್ಣ ಮುಂದೆ ಹಾಡು ಬರುತ್ತದೆ. ಹಬ್ಬ ಹರಿದಿನಗಳು, ವಿವಿಧ ದಿರಿಸುಗಳು, ಯಕ್ಷಗಾನ, ಕೋಲಾಟ, ಕುಚುಪುಡಿ ಭರತ ನಾಟ್ಯಗಳು 'ಸಾಂಸ್ಕೃತಿಕ' ಅನ್ನುವ ಪದದ ಜೊತೆಗೆ ತಳುಕು ಹಾಕಿಕೊಂಡು ಕಣ್ಮುಂದೆ ಕುಣಿಯುತ್ತದೆ, ಇದೆಲ್ಲವೂ ನಿಜ ಕೂಡ ಹೌದು.       ಆದರೆ ಸಂಸ್ಕೃತಿ ಎಂದರೆ ನಮ್ಮ ದಿನ ನಿತ್ಯದ ಜೀವನವು ಹೌದು ಎಂದರೆ ನಿಮಗೆ ಆಶ್ಚರ್ಯವೆನಿಸಬಹುದು. ನಾವು ದಿನನಿತ್ಯದ ಬದುಕಿನಲ್ಲಿ ಎದುರಿಸುವ ಸಂಗತಿಗಳು, ಆಚರಣೆಗಳು , ನಮ್ಮ ಅಭಿರುಚಿ, ಆಸಕ್ತಿಗಳು, ಹವ್ಯಾಸ, ಟೈಮ್ ಪಾಸ್ ಗಳು ಇವೆಲ್ಲವೂ ಸಾಂಸ್ಕೃತಿಕ ಅಧ್ಯಯನದ ಭಾಗ ಮಾತ್ರವಲ್ಲದೆ ಸಂಸ್ಕೃತಿಯನ್ನು ವಿವರಿಸುವ ವಿಚಾರಗಳೂ ಹೌದು, ಅಧ್ಯಯನಕ್ಕೆ ವಿಷಯವೂ ಹೌದು. ಸ್ವಲ್ಪ ವಿವರಿಸಬೇಕೆಂದರೆ, ನೀವು ವಾಟ್ಸ್ ಆಪ್ ಗುಂಪುಗಳಲ್ಲಿ ಬಂದಿರುವ ಶೇರ್ ಆಗಿರುವ ಕೆಲವೊಂದು ಹಳೆಯ ನೆನಪುಗಳನ್ನು ವಿವರಿಸುವ ವಿಡಿಯೋಗಳನ್ನ ನೋಡಿರಬಹುದು. ಅಲ್ಲಿ ನೀವು ಬಾಲ್ಯದ ದಿನಗಳಲ್ಲಿ ಕಂಡಿದ್ದ ಪೆಪ್ಪರ್ಮೆಂಟಿನ ಚಿತ್ರ, ಐಸ್ ಕ್ಯಾಂಡಿಯ ರುಚಿ, ಆಟೋಟಗಳ ನೆನಪುಗಳನ್ನು ಮೆಲುಕು ಹಾಕಿರುತ್ತೀರಿ. ಸ್ವಚ್ಚಂದವಾಗಿ ಸುತ್ತಾಡುತ್ತ ಮರಗಿಡಗಳಲ್ಲಿ ಹೆಕ್ಕಿ, ಕಿತ್ತು ತಿಂದ ಹಣ್ಣು ಕಾಯಿಗಳನ್ನ ನೆನಪಿಸಿಕೊಂಡಿರುತ್ತೀರಿ. ಅದೇ ರೀತಿ, "ಈಗ ಚಣ್ಣೆ ಮಣೆ ಆಟಾನೇ ಇಲ್ಲ,