ಸ್ಪೆಷಾಲಿಟಿ

ಬಸ್ಸಿನಲ್ಲಿ ಜೊತೆಜೊತೆಯಾಗಿ ಪ್ರಯಾಣಿಸುತ್ತಿದ್ದ ದಂತ ವೈದ್ಯರಿಬ್ಬರ ನಡುವೆ ವಾಗ್ವಾದ ಶುರುವಾಗಿತ್ತು . "ಎದುರಿನ ಸೀಟಿನಲ್ಲಿ ಕುಳಿತ ವ್ಯಕ್ತಿಯ ದವಡೆ ಬಾತಿದೆ, ಅವನು ದಂತಕುಳಿ ಸಮಸ್ಯೆಯಿಂದ ಬಳಲುತ್ತಿದ್ದಾನೆ". ಎಂದ ಮೊದಲ ವೈದ್ಯ . "ಇದನ್ನು ಸಿಮೆಂಟ್ ಹಾಕಿ ಭರ್ತಿ ಮಾಡಿದರೆ ಸಮಸ್ಯೆಗೆ ಪರಿಹಾರವೂ ಇದೆ", ಎಂದು ಸೇರಿಸಿದ .
ಎರಡನೇ ವೈದ್ಯ ಇದಕ್ಕೆ ಸಮ್ಮತಿಸಲಿಲ್ಲ , ಆತನೆಂದ "ಆತನ ವಸಡಿನಲ್ಲಿ ಸಮಸ್ಯೆ ಇರುವುದರಿಂದ ಹಲ್ಲುಗಳು ಅಲುಗಾಡುತ್ತಿವೆ , ವಸಡು ಊದಿರುವ ಕಾರಣದಿಂದಾಗಿ ಆತನ ದವಡೆ ಊದಿದಂತೆ ಕಾಣಿಸುತ್ತಿದೆ, ಎಂದ .
ಅಷ್ಟರಲ್ಲಿ ಎದುರುಗಡೆ ಸೀಟಿನಲ್ಲಿ ಕುಳಿತವನು ಸರಕ್ಕನೆ ಕಿಟಕಿ ತೆಗೆದು  ಪಿಚಕ್ ಎಂದು ಬಾಯಲ್ಲಿ ತುಂಬಿಕೊಂಡಿದ್ದ ಎಲೆಅಡಿಕೆ ಯನ್ನು ಉಗಿದ, ದವಡೆ ಊತ ಮಾಯವಾಗಿತ್ತು .
ಇಬ್ಬರೂ ದಂತವೈದ್ಯರ ಬಿಳೀ ಕೋಟಿನ ಮೇಲೆ ಕೆಂಪನೆಯ ಹನಿಗಳ ಗುರುತುಗಳಾಗಿದ್ದವು . 

Comments

Popular posts from this blog

ಕುರುಡು ಮಂತ್ರ -ಪದ್ಮನಾಭ ಆಗುಂಬೆ ಅವರ ಕಾದಂಬರಿ ಬಗ್ಗೆ ನನ್ನ ಲೇಖನ.